Wednesday, June 24, 2009

ನುಡಿ ಮುತ್ತುಗಳು - ೨೭

ನಾಚಿಕೆ ಅನ್ನುವುದನ್ನು ಬಿಟ್ಟಾಗ ಮಾನವ ಮೃಗನಾಗುತ್ತಾನೆ.
-ಯಾರೋ

ನಿಮ್ಮ ನಿನ್ನೆಯ ದಿನ ಇಂದಿನ ದಿನವನ್ನು ನುಂಗದಂತೆ ನೋಡಿಕೊಳ್ಳಿ.

ನಗಲು ಬರುವವನು ಮಾತ್ರ ಇತರರನ್ನೂ ನಗಿಸಬಲ್ಲ.
-ವಿಟ್ ಮನ್

ನಾವು ನಮ್ಮನ್ನೇ ಅಲಕ್ಷಿಸದಿರುವುದು ನಮ್ಮ ಮೊದಲ ಕರ್ತವ್ಯ.

ನಿರಾಸೆ ಮರಣದ ಮತ್ತೊಂದು ಹೆಸರು.
-ಟಾಲ್ ಸ್ಟಾಯ್

ನಕ್ಕು ನಗಿಸುವಾ ನಗುಲೇಸು.

"ನಡೆದುಬಂದ ದಾರಿ ಕಡೆಗೆ ಹೊರಳಿಸಬೇಡ ಕಣ್ಣನು"
-ಅಡಿಗರು

ನೋವೆಲ್ಲಾ ಜೀವಕ್ಕೆ ಪುಟವಿಡುವ ಪಾಕ.
-ಕನ್ ಫ್ಯೂಷಿಯಸ್

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ .
-ಅಡಿಗರು


2 comments: